Saturday, December 24, 2011

ಭೂಸ್ವಾಧೀನ ಕಾಯ್ದೆ: ವಸಾಹತುಶಾಹಿಯ ಪಳೆಯುಳಿಕೆ

http://www.prajavani.net/web/include/story.php?news=2042§ion=170&menuid=14



1894ರಲ್ಲಿ ಬ್ರಿಟಿಷರು ಈ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದರು ಎನ್ನುವುದು ಚರಿತ್ರೆಯ ಪುಟಗಳನ್ನು ತಿರುವಿದಾಗ ನಮಗೆ ತಿಳಿದು ಬರುತ್ತದೆ. ರೈಲು ಸಂಚಾರ, ನೀರಾವರಿ ಯೋಜನೆ, ಹಿಮಾಲಯ ಪ್ರಾಂತ್ಯದಿಂದ ಮರದ ದಿಮ್ಮಿಗಳನ್ನು ಸಾಗಿಸುವುದು ಮುಂತಾದ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ಅಗತ್ಯವೆನಿಸಿದ್ದ ವೇಳೆ ತಕ್ಷಣವೇ ಭೂಮಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಅವರು ಈ ಕಾಯ್ದೆಯನ್ನು ಜಾರಿಗೆ ತಂದರು.

ಹೀಗಾಗಿಯೇ ಅವರು ಇಂತಹ ಸ್ವಾಧೀನ ಪ್ರಕ್ರಿಯೆಯಲ್ಲಿ ಬ್ರಿಟಿಷ್ ಆಡಳಿತಕ್ಕೆ ಪರಮಾಧಿಕಾರದ ಅಗತ್ಯವನ್ನು ಒತ್ತಿಹೇಳುತ್ತಾ ಇದನ್ನು ಬಲವಾದ ಕಾರ್ಯವಿಧಾನವುಳ್ಳ ಕಾನೂನಾಗಿ ಮಾರ್ಪಡಿಸಿದರು.

ಈ ಕಾಯ್ದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನುಕೂಲಕರವಾಗಿದ್ದರಿಂದ ಅದು ಹಾಗೆಯೇ ಮುಂದುವರಿದುಕೊಂಡು ಬಂತು. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಅದರಲ್ಲಿರಲಿಲ್ಲ.

ಸ್ವಾತಂತ್ರ್ಯ ದೊರೆತು 60ಕ್ಕೂ ಹೆಚ್ಚು ವರ್ಷಗಳು ಸಂದರೂ ಇಂದಿನವರೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ಕಾನೂನು ರೂಪಿಸಿದ್ದು ನಮಗೆ ತಿಳಿದಿಲ್ಲ. ವಸಾಹತುಶಾಹಿ ಆಡಳಿತವಿದ್ದಾಗ ಇದನ್ನು `ಭೂ ಸ್ವಾಧೀನ` ಎಂದು ಕರೆಯುವುದು ಸರಿ ಎನಿಸಿತ್ತು. ಆದರೆ, ಕಳೆದ ದಶಕಗಳಲ್ಲಿ ಸಾಂಪ್ರದಾಯಿಕ ನಡವಳಿಕೆಯಂತೆ ನಡೆದುಕೊಂಡು ಬಂದಿರುವ ಈ ಸ್ವಾಧೀನ ಪ್ರಕ್ರಿಯೆ ಎಂಬ ಚಿಂತನೆಯೇ ಅಸಾಂವಿಧಾನಿಕವಾಗಿದೆ.


ಹಾಗಾಗಿ ಈಗ ನೀವೇನು ಮಾಡಬಹುದು. ಸ್ವಾಧೀನದ ಬದಲಾಗಿ ಮನವಿಯ ಮೊರೆ ಹೋಗಬೇಕಾಗುತ್ತದೆ. ಭೂಮಿಯ ಒಡೆಯನಿಂದ ನಿಮಗೆ ಆ ಭೂಮಿಯನ್ನು ಪಡೆಯುವುದು ಅತ್ಯವಶ್ಯಕವಾಗಿದೆ. ಅದೇ ವೇಳೆ ಆ ಭೂಮಾಲಿಕರ ಹಕ್ಕುಗಳನ್ನು ನೀವು ಒಪ್ಪಿಕೊಳ್ಳಲೇ ಬೇಕು.

ಯಾವುದೇ ಒಂದು ಸಂಸ್ಥೆ, ಗಣಿ ಕಂಪನಿಯೇ ಆಗಿರಲಿ ಅಥವಾ ದೊಡ್ಡ ವಿದ್ಯುತ್ ಉತ್ಪಾದನಾ ಯೋಜನೆಯೇ ಆಗಿರಲಿ, ಅದು ತನ್ನ ಕಾರ್ಯಯೋಜನೆಗಳಿಗಾಗಿ ಭೂಮಾಲಿಕ ತನ್ನ ಭೂಮಿಯನ್ನು ಅಥವಾ ಸಂಪನ್ಮೂಲಗಳನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ಆದರೆ, ಅದರಿಂದ ಅವರು ಅನುಭವಿಸಬೇಕಾದ ಸಂಕಷ್ಟಗಳು, ಜೀವನಾಧಾರ ಕಳೆದುಕೊಳ್ಳುವ ಭೀತಿ, ತನ್ನ ಸಮುದಾಯ ಮತ್ತು ತಾನು ಹೊಂದಿದ್ದ ಭೂಮಿಯಿಂದ ಬೇರ್ಪಡಬೇಕಾದ ಮನೋವೇದನೆ, ಪುನರ್ವಸತಿ ಸಮಸ್ಯೆ ಇವುಗಳೆಲ್ಲದಕ್ಕೂ ನಿರ್ದಿಷ್ಟ ಸಂಸ್ಥೆ ಅಥವಾ ಸರ್ಕಾರ ಪರಿಹಾರವನ್ನು ನೀಡಲು ಒಪ್ಪಿಕೊಳ್ಳುತ್ತದೆ.

ಅದಕ್ಕಾಗಿ ನೂರು ವರ್ಷಗಳಷ್ಟು ಹಳೆಯದಾದ ಕಾಯ್ದೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಸರಿಸಮಾನವಾದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವ ಮಾದರಿಯಲ್ಲಿ ಪುನರ್‌ನವೀಕರಿಸಬೇಕಾದ ಅಗತ್ಯವಿದೆ.

ರಾಜಸ್ತಾನಕ್ಕೆ ಅನ್ವಯಿಸುವುದೆಲ್ಲವೂ ಹಿಮಾಚಲ ಪ್ರದೇಶಕ್ಕೆ ಅನ್ವಯಿಸಲಾರದು. ಪ್ರಸ್ತುತ ಮಸೂದೆಯನ್ವಯ ಒಟ್ಟಾಗಿ 100 ಎಕರೆಯನ್ನು ಸ್ವಾಧೀನಪಡಿಸಿಕೊಂಡಲ್ಲಿ ಮಾತ್ರ ಪುನರ್ವಸತಿಗೆ ಸಂಬಂಧಿಸಿದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಾಧ್ಯ. ಆದರೆ ಪರ್ವತ ಪ್ರದೇಶದಲ್ಲೇ ಆಗಲಿ, ಅಥವಾ ಪಶ್ಚಿಮ ಘಟ್ಟದಲ್ಲೇ ಆಗಲಿ 100 ಎಕರೆ ಎನ್ನುವುದು ಬಹು ದೊಡ್ಡ ಪ್ರಮಾಣವೇ ಸರಿ.

ಹೀಗೆ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿಕೊಟ್ಟಲ್ಲಿ ಆಯಾ ಪ್ರದೇಶಗಳ ನೂರಾರು ವರ್ಷಗಳಷ್ಟು ಹಳೆಯದಾದ ಸಮುದಾಯಗಳೇ ಕಣ್ಮರೆಯಾಗುತ್ತವೆ. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಇಂತಹ ಭೂ ಸ್ವಾಧೀನ ಪ್ರಕ್ರಿಯೆಯ ಸೂಕ್ಷ್ಮತೆ ಅರಿತುಕೊಳ್ಳಬೇಕಾಗಿದೆ. ನವದೆಹಲಿಯ ಕಾರಿಡಾರ್‌ಗಳಲ್ಲಿ ಕುಳಿತು ಕಾನೂನು ಜಾರಿಗೊಳಿಸುವ ಬದಲಾಗಿ ಕನಿಷ್ಠ ಪಕ್ಷ ಸ್ಥಳೀಯಾಡಳಿತವಾದರೂ ಸ್ಥಳೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.


ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿ ಅತಿಯಾದ ಕಾರ್ಯವಿಧಾನಗಳಿಂದಾಗಿ ಕೇಂದ್ರದ ಕಾಯ್ದೆಗೆ ತನ್ನ ಉದ್ದೇಶವನ್ನು ಈಡೇರಿಸುವುದು ಕಷ್ಟ. ಕಲ್ಲಿದ್ದಲ್ಲಿನ ಬೇಡಿಕೆ, 2030ರ ವೇಳೆಗೆ ಪ್ರಸ್ತುತ ಇರುವ 300 ದಶಲಕ್ಷ ಟನ್‌ಗಳಿಂದ 2 ಶತಕೋಟಿ ಟನ್‌ಗಳಿಗೆ ತಲುಪಲಿದೆ. ಇನ್ನು ಕಬ್ಬಿಣದ ಅದಿರು, ಬಾಕ್ಸೈಟ್ ಮುಂತಾದ ಹಲವು ಯೋಜನೆಗಳು ಅಗತ್ಯವಾಗಿವೆ. ಈ ಯೋಜನೆಗಳಿಗೆಲ್ಲ ಅಗತ್ಯವಾದ ಭೂಮಿಯನ್ನು `ಮಾನವೀಯ ಮುಖ`ದ ನೆಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ.

ವಿಶ್ವದ ಉಳಿದೆಲ್ಲ ದೇಶಗಳು ನಮಗೆ ಕಲಿಸುತ್ತಿರುವ ಪಾಠವಾದರೂ ಏನು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ `ಮುಕ್ತವಾದ, ಆದ್ಯತೆಯ, ಮಾಹಿತಿಪೂರ್ಣ ಒಪ್ಪಂದವನ್ನು ರೈತರಿಂದ ಬಯಸಿದೆ. ಅಂದರೆ ಸರ್ಕಾರವಾಗಲಿ, ಸಂಸ್ಥೆಯಾಗಲಿ ರೈತರ ಬಳಿ ತೆರಳಿ `ನಮ್ಮ ಯೋಜನೆಗಳಿಗೆ ಇಂತಿಷ್ಟು ಭೂಮಿ ಬೇಕು ಎಂದು ಹೇಳುವಂತಿಲ್ಲ. ಬದಲಾಗಿ ` ಈ ಭೂಮಿ ನಮಗೆ ಬೇಕಾಗಿದೆ` ಎನ್ನುತ್ತಾ ಅದರ ಪರಿಣಾಮಗಳನ್ನು ವಿವರಿಸಬೇಕು.

`ಈ ಯೋಜನೆಯಿಂದ ಇಂತಿಷ್ಟು ಅರಣ್ಯ ಪ್ರದೇಶ ನಾಶವಾಗುತ್ತದೆ, ಇಂತಿಷ್ಟು ಪ್ರಮಾಣದ ನೀರಿನ ಅಗತ್ಯವಿದೆ. ಜನ ಸ್ಥಳಾಂತರಗೊಳ್ಳಬೇಕಾಗುತ್ತದೆ. ದೂಳು ಏಳುತ್ತದೆ ಎನ್ನುವುದನ್ನು ಸರ್ಕಾರ ವಿವರಿಸಬೇಕಾಗುತ್ತದೆ.

ಸರ್ಕಾರವಾಗಲಿ, ಸಂಸ್ಥೆಯಾಗಲಿ ಏನು ಮಾಡುತ್ತಿದೆ ಎಂದು ಜನ ತಿಳಿದುಕೊಳ್ಳುವಂತಾಗಬೇಕು. ಒಂದು ಸಮುದಾಯ ಮತ್ತು ಅವರು ಹೊಂದಿರುವ ಪರಂಪರಾಗತವಾದ ಮತ್ತು ಫಲವತ್ತಾದ ಭೂಮಿ ಮತ್ತು ಅದರ ಸುತ್ತಲಿನ ಅರಣ್ಯಕ್ಕಾಗುವ ಧಕ್ಕೆ ಮತ್ತು ಎದುರಿಸಬೇಕಾದ ಸವಾಲುಗಳನ್ನು ಜನ ತಿಳಿದುಕೊಳ್ಳಬೇಕಾದುದು ಅಗತ್ಯವಾಗಿದೆ.

ಒಂದು ಯೋಜನೆಗೆ ಅಗತ್ಯವಾದ ಭೂಮಿಯನ್ನು ನೀವು ಹೇಗೆ ಅಳತೆ ಮಾಡುವಿರಿ. ಎರಡು ದಶಕಗಳ ಹಿಂದೆ ಹಾಜಿರಾ-ಬಿಜೈಪುರ-ಜಗದೀಶ್‌ಪುರ ಕೊಳವೆ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಂಡಾಗ ಕೇವಲ ಏಳು ರಾಸಾಯನಿಕ ಕಾರ್ಖಾನೆಗಳಿದ್ದವು. ಹೆಚ್ಚು ಕಡಿಮೆ ಇಟಲಿಯ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತಿದ್ದ ಈ ಎಲ್ಲಾ ಘಟಕಗಳು ಪ್ರತಿ ದಿನ 1,350 ಟನ್ ರಾಸಾಯನಿಕ ಉತ್ಪಾದಿಸುತ್ತಿದ್ದವು.

ಎಚ್‌ಬಿಜೆ ಘಟಕಗಳ ಸರಣಿಯಲ್ಲೇ ಐಎಫ್‌ಎಫ್‌ಸಿಒ 376 ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂಡೋ-ಗಲ್ಫ್ ರಾಸಾಯನಿಕ ಕಾರ್ಖಾನೆ 672 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದರೆ ಎನ್‌ಎಫ್‌ಎಲ್ 700 ಎಕರೆ ಪ್ರದೇಶವನ್ನು ಹೊಂದಿದೆ. ಇದೇ ವೇಳೆ ಟಾಟಾ 2100 ಎಕರೆ ಪ್ರದೇಶವನ್ನು ಹೊಂದಿದೆ.

ಹೊಸ ಗಣಿ ಮಸೂದೆ ಅನ್ವಯ ಯಾವುದೇ ಒಂದು ಗುತ್ತಿಗೆಯ ಪ್ರಕಾರ ಯಂತೆ 100 ಚದರ ಕಿ. ಮಿ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಬಹುದು. ಆದರೆ ಕಂಪನಿಗಳು ಮಾಡುತ್ತಿರುವುದಾದರೂ ಏನನ್ನು? ಒಂದು ಗುತ್ತಿಗೆಯ ಮೂಲಕ ಮತ್ತೊಂದು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಲ್ಲದೆ ಎರಡು ಪ್ರದೇಶಗಳ ಸೂಕ್ಷ್ಮ ಪರಿಸರ ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತಿವೆ.

ಸೂಕ್ಷ್ಮ ಪರಿಸರದ ಹಾನಿ ಮತ್ತು ಭೂಸ್ವಾಧೀನ ಪಡಿಸಿಕೊಳ್ಳುವ ಸರ್ಕಾರ ಮತ್ತು ಸಂಸ್ಥೆಗಳ ಶ್ರಮವನ್ನು ತಡೆಯುವಲ್ಲಿ ಕಾನೂನುಗಳಿದ್ದರೂ ಕೂಡ ಸ್ಥಳೀಯಾಡಳಿತದ ಇಚ್ಛಾ ಶಕ್ತಿಯ ಕೊರತೆಯಿಂದ ಅದು ತನ್ನ ಉದ್ದೇಶ ಸಾಧನೆಯಿಂದ ದೂರ ಸರಿದಿದೆ.


ಇವೆಲ್ಲವೂ ಖಂಡಿತವಾಗಿ ಬಹಳ ಸಂಕೀರ್ಣವಾದ ಸಮಸ್ಯೆಗಳೇ ಹೌದು. ಆದರೆ, ಭೂ ಸ್ವಾಧೀನದಷ್ಟೇ ಹಳೆಯದಾದ ಇಂಥ ವ್ಯವಸ್ಥೆಗೆ ರಚನಾತ್ಮಕವಾದ ಬದಲಾವಣೆ ಮಾಡಬೇಕೆನ್ನುವ ಪ್ರತಿಯೊಂದು ಸಲಹೆಯಲ್ಲಿ ಅಡಗಿರುವ ಸವಾಲುಗಳನ್ನು ಪರಿಣತರು ಕಂಡುಕೊಳ್ಳಬೇಕಾಗಿದೆ.

ರೈತರಿಗೆ ಯಾವುದು ಪ್ರಯೋಜನಕಾರಿ? ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರದಿಂದಾಗಿ ಲಕ್ಷಗಟ್ಟಲೆ ಜನರ ನರಳುತ್ತ್ದ್ದಿದಾರೆ. ಸರ್ಕಾರದ ಈ ಘೋರ ಮುಖವನ್ನು ಹೊರಗೆಳೆಯುವುದಾದರೂ ಹೇಗೆ?. ಅಣ್ಣಾ ಹಜಾರೆ ಅವರು ಕೇಳುತ್ತಿರುವ ಪ್ರಶ್ನೆಯೂ ಇದೇ.

Thursday, November 10, 2011

Deputation ETC

Deputation

Sunday, September 4, 2011

Amendment to KAS Examination Syllabus

ಬಹಳ ವರುಷಗಳ ನಂತರ ಕೆ ಎ ಎಸ ಇತ್ಯಾದಿ gezetted ಹುದ್ದೆಗಳ ನೇಮಕಾತಿ ನಿಯಮಗಳನ್ನು ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ.ಇದಕ್ಕೆ ಈ ಹಿಂದೆ ಹಳೆಯ ನಿಯಮಗಳನ್ವಯ ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ  quality ಕಾರಣ ಇರಬಹುದು. Gezeted probationers ಪರೀಕ್ಷೆಯ ಸಿಲಬಸ್ ಬದಲಾಯಿಸುವ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗವೇ ಒಂದು ಆಳವಾದ ಅಧ್ಯಯನ ನಡೆಸಿ ಸಿಲಬಸ್ ಬದಲಿಸುವ ಬಗ್ಗೆ ಸರ್ಕಾರಕ್ಕೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಿತ್ತಂತೆ. ಆದರೆ ಸರ್ಕಾರಕ್ಕೆ ಈ ಆಯೋಗದ ಸದಸ್ಯರ ಬುದ್ದಿಶಕ್ತಿಯ ಬಗ್ಗೆ ಅನುಮಾನವೋ, ಅಥವಾ ಅವರನ್ನೆಲ್ಲಾ ಮಹಾ ಮೂರ್ಖರೆಂದು ಪರಿಗಣಿಸಿತೋ ಎನೋ, ಆ ಪ್ರಸ್ತಾವನೆಯನ್ನು ಕಸದ ಬುಟ್ಟಿಗೆ ಎಸೆದು ಗುಮಾಸ್ತರ ಮೂಲಕ  ತಾನೇ ಒಂದು ಸಿಲಬಸ್ಸನ್ನು ಸಿದ್ದಪಡಿಸಿದೆ. 
Karnataka recruitment of Gazetted Probationers (Appointment by Compititive Examination) Rules 1997  ಗೆ ತಿದ್ದುಪಡಿ ಮಾಡಿ ದಿನಾಂಕ 29-8-2011  ರಂದು Draft Rules  ಹೊರಡಿಸಿದೆ. ಇದಕ್ಕೆ ಹದಿನೈದು ದಿನಗಳಲ್ಲಿ ಯಾವುದೇ ಪ್ರಮುಖ ಆಕ್ಷೇಪಣೆ ಬರದೆ ಇದ್ದಲ್ಲಿ ಇದೇ  ಕರಡು ಖಾಯಂ ಗೊಳ್ಳಲಿದೆ . 

The draft Notification No. DPAR 14 SRR 2011 Dated 29-08-2011 has been given hereunder


 





KAS New syllabus 2011, KAS Revised syllabus.......

Saturday, September 3, 2011

ನೌಕರರೆ , ಚಂದಾ ಎತ್ತಬೇಡಿ -ಹುಷಾರ್






  ಚಂದಾ ಎತ್ತಬೇಡಿ -ಹುಷಾರ್ ....

ಸರ್ಕಾರಿ ಸಮಾರಂಭಗಳಿಗೆ ಅಲಂಕಾರ ಮಾಡುವ ನೆಪದಲ್ಲಿ, ರಾಷ್ಟ್ರೀಯ ಹಬ್ಬಗಳಿಗೆ ವಾಹನಗಳಿಗೆ ಸಿಂಗಾರ ಮಾಡುವ ನೆಪದಲ್ಲಿ ,ಹಬ್ಬ ಹರಿದಿನಗಳ ಕಾರಣ ಮುಂದಿಟ್ಟುಕೊಂಡು ಸಾರ್ವಜನಿಕರಿಂದ ,ಸಹೋದ್ಯೋಗಿಗಳಿಂದ ಬಿಕ್ಷೆ ಬೇಡುವುದನ್ನು ಮೇಲ್ಕಂಡ ಸುತ್ತೋಲೆ ನಿಷೇಧಿಸುತ್ತದೆ.

ನಿಯೋಜನೆ ಅವಧಿ -ಖಡ್ಡಾಯವಾಗಿ ಐದು ವರ್ಷ ಮಾತ್ರ

ನಿಯೋಜನೆ ಅವಧಿ -ಖಡ್ಡಾಯವಾಗಿ ಐದು ವರ್ಷ ಮಾತ್ರ 

Wednesday, August 31, 2011

Mr Suresh Kumar, Do you have it in you?

Though most of the politicians are opposed to the second freedom movement' led by Anna Hazare, some politicians are trying to get cheap publicity using his name. Today's (31/8/2011) Times of India(Bangalore) quoted many politicians giving their own idea about courruption. It quoted Suresh Kumar, Karnataka's Minister for Urban Development and Law &Justice as hereunder,

 "Will introduce transparency in recruitment system to reduce corruption
Will stress on e-governance at all levels and information dissemination
Will recommend the government to include topics on anticorruption in school curricular. This can inspire young minds.

First of all, Mr Kumar should understand that the Urban Development Minisry headed by him is one of the most corrupt Department  in the Karnataka government secretariat. If  Suresh Kumar wants to join the Anti-corruption drive,he should clean up his own department before recommending to the government to add topics about anti corruption in school curriculam.  Probably it is beyond his ability to clean this department. Nobody can get into this department without the recommendations from ministers/CM or giving heavy bribe. It is difficult to transfer them out of the department once they establish themselves in the department. If the Minister try to transfer them,they will get a 'stay order' from KAT (Karnataka Administrative Tribunal) and continue in the same post. That is the state of affair going on in Karnataka. It is difficult to move people from a depatment once they establish themselves in some profitable post. This is happening particularly in Finance , Revenue,Health, Urban Development,Education Department. Even Pricipal Secretaries(heads of Department) have bit dust trying to transfer staff from one department to another. 
Mr Suresh Kumar.........can you do it?



Sunday, August 21, 2011

ಪಂಚಾಯತ್ ರಾಜ್ ಬ್ರಷ್ಟಾಚಾರ .

ಈ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಎಂಬುದು ಬ್ರಷ್ಟರ ಲ್ಯಾಬೋರೇಟರಿ . ಇಲ್ಲಿ ಬ್ರಷ್ಟಾಚಾರ ಮಾಡೋದನ್ನು ಕಲಿತುಬಿಟ್ಟರೆ ಎಲ್ಲಿ ಕೂಡ ಬ್ರಷ್ಟಾಚಾರ ಮಾಡಬಹುದು. ಅದಕ್ಕೆಂದೇ ಐ.ಎ.ಎಸ್ ಅಧಿಕಾರಿಗಳು ಅವರ ಸಂದರ್ಶನದಲ್ಲಿ  "ನಮಗೆ ಗ್ರಾಮೀಣ ಅಭಿವೃದ್ದಿ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾ ಆಸಕ್ತಿ "ಅಂತಾ ಬೊಗಳುವುದು. ಇನ್ನು ಗ್ರಾಮೀಣ ಅಭಿವೃದ್ದಿ ಸಚಿವರಾಗುವುದ್ದಕ್ಕೆ ಎಲ್ಲಿಲ್ಲದ ಸ್ಪರ್ಧೆ. ಇನ್ನು ಈ ಇಲಾಖೆಗೆ ಈ ಓ ಆಗಿ ನಿಯೋಜನೆ ಮೇಲೆ ಬರುವವರು ಮಹಾ ಕಳ್ಳರೇ.
ಈ ವ್ಯವಸ್ಥೆ ಎಷ್ಟು ಕುಲಗೆಟ್ಟಿದೆ ಎಂದರೆ ಅಣ್ಣಾ ಹಜಾರೆ ಯ ಲೋಕಪಾಲ್ ಬಂದರೂ ಇಲ್ಲಿನ ಖಧೀಮರ ಕೂದಲೂ ಕೊಂಕುವುದಿಲ್ಲ.
ಉದಾಹರಣೆಗೆ,  ಒಂದು ಜಿಲ್ಲಾ ಪಂಚಾಯತ್ ನ ಸಿ ಇ ಓ ಆಗಿದ್ದವನ ಮನೆ ಮೇಲೆ ಲೋಕಾಯುಕ್ತ ದಾಳಿಯಾಯಿತು. ಲೋಕಾಯುಕ್ತರು ಅವನನ್ನು ಅಮಾನತ್ತು ಮಾಡಿ ಅಂತಾ ಸರ್ಕಾರಕ್ಕೆ ಪತ್ರ ಬರೆದರು. ಸರ್ಕಾರ ಅವನನ್ನು ಅಮಾನತ್ತು ಮಾಡುವುದಿರಲಿ ,ಅವನನ್ನು ನಿರಫರಾಧಿ ಎಂದು ಘೋಷಿಸಿ ಪದೋನ್ನತಿ ನೀಡಿ ಪಂಚಾಯತ್ ರಾಜ್ ಇಲಾಖೆಯ ನಿರ್ಧೇಶಕ ಹುದ್ದೆ ನೀಡಿತು. ಅಲ್ಲಿ ನುಂಗಲು ಸಾಕಷ್ಟು ಅವಕಾಶ ಇಲ್ಲದ ಕಾರಣ ಅವನು ಮತ್ತೆ ಯಾವುದೋ ಜಿಲ್ಲಾ ಪಂಚಾಯತಿಗೆ ಸಿ ಇ ಓ ಆಗಿ ಹೋದ. ಹೀಗೆ ಈ ಇಲಾಖೆಯ ಕರ್ಮಕಾಂಡ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಇರುವುದಿಲ್ಲ.ಇಲ್ಲಿಯವರೆಗೇನೂ ಈ ಇಲಾಖೆಗೆ ಇಲ್ಲಿನ ಒಳಹೊರವನ್ನು ಅರಿತಿದ್ದ ಕಚಡಾ  ಜನಗಳೇ ನಿಯೋಜನೆ ಮೇಲೆ ಹೋಗುತಿದ್ದರು. ಆದರೆ ಈ ನುಂಗಣ್ಣಗಳ ನಡುವೆ ಪಿ ಡಿ ಓ ಎಂಬ ಮುಗ್ಧರನ್ನು ಸೇರಿಸಲಾಯಿತು.  ಗ್ರಾಮೀಣ ಅಭಿವೃದ್ದಿ ಎಂಬ ಮಾಯಾ ಜಿಂಕೆಯಿಂದ ಆಕರ್ಷಿತರಾಗಿ ಇಲ್ಲಿ ಸೇರಿಕೊಂಡ ನೌಕರರದು ಈಗ ನಾಯಿಪಾಡಗಿದೆ. ಇದನ್ನು ಅಗಸ್ಟ್ 21,2011 ರ ಪ್ರಜಾವಾಣಿ ಪತ್ರಿಕೆಯಲ್ಲಿ "ಪದ್ಮರಾಜ್ ದಂಡಾವತಿ " ಸೊಗಸಾಗಿ ಬರೆದಿದ್ದಾರೆ. ಅದನ್ನು ಓದಲು ಈ ಕೆಳಗಿನ "ಲಿಂಕ್" ಹಿಂಬಾಲಿಸಿ .

Thursday, August 18, 2011

ಬೇಕಾಬಿಟ್ಟಿ ವರ್ಗ :ಉಗಿಸಿಕೊಂಡ ರಾಜ್ಯ ಸರ್ಕಾರ

http://www.prajavani.net/web/include/story.php?news=36328&section=5&menuid=10


ಬೆಂಗಳೂರು: ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸುವ ಎಂಜಿನಿಯರ್‌ಗಳನ್ನು ನಿಯೋಜನೆ ಆಧಾರದ ಮೇಲೆ ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುತ್ತಿರುವ ಕ್ರಮಕ್ಕೆ ಹೈಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ವಿಚಾರಣೆಗೆ ಸಂಬಂಧಿಸಿದಂತೆ ಹಾಜರು ಇದ್ದ ಕಾನೂನು ಇಲಾಖೆಯ ಕಾರ್ಯದರ್ಶಿಗಳನ್ನು ಉದ್ದೇಶಿಸಿದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ, `ನಿಮ್ಮ ಮಗುವನ್ನು ಬೇರೆಯವರ ಮನೆಯಲ್ಲಿ ಉಳಿಯಲು ಹೇಗೆ ಬಿಡುತ್ತೀರಿ, ನಿಮಗೆ ಮಕ್ಕಳು ಹೆಚ್ಚಾಗಿದ್ದರೆ ಮಾತ್ರ ನೀವು ಈ ರೀತಿ ಮಾಡಬಹುದು ಅಷ್ಟೇ.

ನೀವು ಈ ರೀತಿ ನಿಮ್ಮ ಎಂಜಿನಿಯರ್‌ಗಳನ್ನು ಬೇರೆ ಇಲಾಖೆಗೆ ಕಳುಹಿಸುತ್ತಿದ್ದೀರಿ ಎಂದರೆ ಬಿಬಿಎಂಪಿಯಲ್ಲಿ ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚು ಇದೆ ಎಂದ ಹಾಗಾಯಿತು.

`ಒಂದೆಡೆ ಸಿಬ್ಬಂದಿ ಕೊರತೆ ಎನ್ನುತ್ತೀರಿ, ಇನ್ನೊಂದೆಡೆ ಅವರನ್ನು ನಿಯೋಜನೆ ಆಧಾರದ ಮೇಲೆ ಬೇರೆಡೆ ಕಳುಹಿಸುತ್ತೀರಿ , ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇದುವರೆಗೆ ವರ್ಗಾವಣೆ ನೀತಿ ಪಾಲನೆ ಆಗದೇ ಇರುವುದು ಶೋಚನೀಯ.ಇದನ್ನೆಲ್ಲ ಗಮನಿಸಿದರೆ, ಈ ರೀತಿಯ ವರ್ಗಾವಣೆ ಹಿಂದೆ ಬೇರೆಯೇ ಏನೋ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ` ಎಂದು ತಿಳಿಸಿತು.

`ಶಿಕ್ಷಕರನ್ನೂ ಇದೇ ರೀತಿ ನಿಯೋಜನೆ ಆಧಾರದ ಮೇಲೆ ಬೇರೆ ಬೇರೆ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ವರ್ಷಗಟ್ಟಲೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಅವರು, ಶಿಕ್ಷಕ ವೃತ್ತಿಯನ್ನೇ ಮರೆಯುತ್ತಾರೆ.    ಎಂಜಿನಿಯರಿಂಗ್ ಕೋರ್ಸ್ ಮಾಡಿದವರನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುವುದು ಎಂದರೆ ಏನರ್ಥ` ಎಂದು ನ್ಯಾಯಮೂರ್ತಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿಯ ವರ್ಗಾವಣೆಯನ್ನು ಪ್ರಶ್ನಿಸಿ ಕುಬೇರಪ್ಪ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಮಂಗಳವಾರ ವಿಚಾರಣೆ ವೇಳೆ, ಬಿಬಿಎಂಪಿ ಆಯುಕ್ತರ ಖುದ್ದು ಹಾಜರಿಗೆ ಪೀಠ ನಿರ್ದೇಶಿಸಿತ್ತು. ಅವರು ಹಾಜರು ಇರುವುದು ಬಿಟ್ಟು, ಕಾನೂನು ಇಲಾಖೆ ಕಾರ್ಯದರ್ಶಿಗಳು ಹಾಜರು ಇದ್ದರು.
ಈ ಬಗ್ಗೆಯೂ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದ ಅವರು, ಅಂದು ಬಿಬಿಎಂಪಿ ಆಯುಕ್ತರ ಹಾಜರಿಗೆ ಆದೇಶಿಸಿದರು.


Saturday, August 13, 2011

Case against former KPSC chief


http://ibnlive.in.com/news/case-against-former-kpsc-chief/175281-60-119.html
BANGALORE: The CID Police have registered a case against former chairman of Karnataka Public Service Commission (KPSC) H N Krishna and others, in the Vidhana Soudha police station on Thursday evening on charges of irregularities following the direction by the High Court. Additional Commissioner T Sunil Kumar confirmed this to The New Indian Express and said, “I don’t have the details of the case as of now and I cannot comment on what charges the case has been registered,” he said. The Inspector of Vidhana Soudha B S Lakhman Kumar told The New Indian Express that they have registered a forgery case against the accused.



It is alleged that during Krishna’s time, three women candidates got into the KPSC service, though they provided fake documents including caste certificates, an officer added.



Sources in the CID said that Inspector of Criminal Investigation Department V P N Swamy has registered the case with the Vidhana Soudha police.



The top officers of CID wanted to suspend Inspector Swamy in relation to the KPSC scam investigation, but later they dropped the idea after Swamy’s senior colleague opposed this by saying his friend was a scapegoat in this case. Now the senior officials have asked the same Inspector to become complainant in the case, sources revealed.



It may be recalled that the High Court has lashed out at the CID for not registering a criminal case against those involved in irregularities in selection of candidates by KPSC between 1998-2004.



The petition was filed by B Raghu, Khaleel Ahmed, Suresh Kumar and 60 others.



All the candidates, who were victims of the irregularities between 1999 and 2004, sought a probe into the alleged irregularities.

Friday, August 12, 2011

"ವಿಶೇಷ ಪ್ರಕರಣ" ಎಂಬ ಅನೈತಿಕ ಮಾರ್ಗ



 
                      ನಿಯೋಜನೆ ಮೇಲೆ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಹೋಗಿ  ಸೇವೆ ಸಲ್ಲಿಸಲು ಇರುವ ಗರಿಷ್ಟ ಕಾಲಮಿತಿ ಐದು ವರುಷ . ಹೆಚ್ಚಾಗಿ ಜನ ಹಳ್ಳಿಗಳಿಂದ ಪಟ್ಟಣ ಸೇರಿಕೊಳ್ಳಲು ಈ ಮಾರ್ಗೋಪಾಯ ಬಳಸುತ್ತಾರೆ. ವಿಶೇಷ ತಾಂತ್ರಿಕ ಜ್ಞಾನ ,ಪರಿಣತಿ ಇರುವವರ ಸೇವೆಯನ್ನು ಇನ್ನೊಂದು  ಇಲಾಖೆ ಬಳಸಿಕೊಳ್ಳಲಿ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಈ ನಿಯೋಜನೆಯ ಅವಕಾಶವನ್ನು ಕಲ್ಪಿಸಲಾಗಿದೆ.ಆದರೆ ಈ  ಸೌಲಭ್ಯದ ಹೆಚ್ಚಿನ ಪಲಾನುಭಾವಿಗಳು ಥರ್ಡ್ ಕ್ಲಾಸ್ ಗುಮಾಸ್ತೆಯರು! . ಕುಟುಂಬದಲ್ಲಿ ರೋಗ ,ರುಜಿನ ಇರುವ ಮಂದಿ ಬೆಂಗಳೂರಿಗೆ ಬಂದು ಶೂರ್ಶುಷೆ ಪಡೆಯಲಿ ಎಂಬ ಮಾನವೀಯ ಕಾರಣಕ್ಕೆ ಈ ಸವಲತ್ತು ಮಾಡಿದರೆ ಅದನ್ನು ಕಾಲಹರಣಕ್ಕೆ  ಕಚೇರಿಗೆ ಬರುವ ಮಾಡರ್ನ್ ಹೆಂಗಸರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಇದಕ್ಕೆ ದೊಡ್ಡ ಉದಾಹರಣೆ ವಿಧಾನ ಸೌಧ . ಎಲ್ಲೋ ಒಂದು ಕಡೆ ಕೆಲಸಕ್ಕೆ ಸೇರಿ ನಂತರ ವಶೀಲಿ ಉಪಯೋಗಿಸಿ ವಿಧಾನಸೌಧ ಸೇರಿದವರು ನಂತರ ಅಲ್ಲಿಂದ ಕದಲುವುದೇ ಇಲ್ಲ. ನಿಯೋಜನೆಯ ಅವಧಿ ಐದು ವರ್ಷ ಎಂಬ ನಿಯಮ ಗಾಳಿಗೆ ತೂರಿ ಹತ್ತಾರು ವರುಷ ಇಲ್ಲೇ ಝಾಂಡಾ ಊರುತ್ತಾರೆ.
ಈಗ ನಿಮ್ಮ ಮನಸಲ್ಲಿ ಇನ್ನೊಂದು ಪ್ರಶ್ನೆ ಉದ್ಹ್ಬವಿಸಬಹುದು. " ಇಷ್ಟೆಲ್ಲಾ ಉಲ್ಲಂಘನೆ ಆಗುವ ಈ ನಿಯಮ ಯಾಕೆ ಬೇಕು?     ಇದನ್ನು ನೀವು ಈ ನಿಯಮ ಮಾಡಿರುವ ಇಲಾಖೆಯವರನ್ನೇ ಕೇಳಬೇಕು . ತಮಾಷೆ ಎಂದರೆ ಈ ಅಧಿಕೃತ ಜ್ಞಾಪನ ಹೊರಡಿಸಿರುವುದು  ಸಿ ಆ ಸು ಇ (ಸೇವಾ ನಿಯಮಗಳು) ಎಂಬ ಇಲಾಖೆ. ನೈತಿಕ ದಿವಾಳಿತನದ ಮೂರ್ತರೂಪದಂತಿರುವ ಈ ವಿಭಾಗದಲ್ಲೇ ನೀವು ಎಲ್ಲ ರೀತಿಯ "ಉಲ್ಲಂಘನೆ" ಗಳನ್ನೂ ನೋಡಬಹುದು. ನಿಯಮಗಳನ್ನು ರೂಪಿಸುವುದರಲ್ಲಿ ಯಾವುದೇ ವಿಶೇಷ ತಜ್ಞತೆ ಇರದ "ಟೈಪಿಸ್ಟ್ ,ಜೂನಿಯರ್ ಅಸಿಸ್ಟಂಟ್ ಶ್ರೇಣಿಯಿಂದ ಬಡ್ತಿ ಪಡೆದು ಬಂದ ಪ್ರಮೋಟಿ ಅಧಿಕಾರಿಗಳು.  
ಹದಿನೈದು ಇಪ್ಪತು ವರ್ಷಗಳಿಂದ ಇಲ್ಲೇ ಇದ್ದು ವರ್ಗಾವಣೆ ನಿಯಮ ಉಲ್ಲಂಘಿಸಿರುವ ಜಡ ಜಂತುಗಳು , ಬೇರೆ ಬೇರೆ ಇಲಾಖೆಯಲ್ಲಿ ತರಹವಾರಿ ತರಲೆ ಮಾಡಿಕೊಂಡು ಅಲ್ಲಿಂದ ಸ್ವೀಪಿಂಗ್ ಸೆಕ್ಷನ್ ಗೆ ಎಸೆಯಲ್ಪಟ್ಟು ನಂತರ ವಶೀಲಿ ಮಾಡಿಕೊಂಡು ಈ ವಿಭಾಗಕ್ಕೆ ಬಂದಿರುವ ಟೈಪಿಸ್ಟ್ ಪ್ರಮೋಟಿಗಳು, ಎಲ್ಲೋ ಕಂದಾಯ ಇಲಾಖೆಯಲ್ಲಿ ಟೆಂಪೊರರಿ ಸೇರಿ ಇಲ್ಲೇ ಪರಮನೆಂಟ್ ಆಗಿ ಬೇರೂರಿರುವ ಜೂನಿಯರ್ ಅಸಿಸ್ಟಂಟ್ ಗಳು. ದೇವರು ಕೊಟ್ಟರು ಪೂಜಾರಿ ಕೊಡ ಎಂಬಂತೆ ನ್ಯಾಯಾಲಯ ತೀರ್ಪು ನೀಡಿದರೂ ಅದನ್ನು ಜಾರಿಗೊಳಿಸುವ ಬಗ್ಗೆ ಅಭಿಪ್ರಾಯ ನೀಡಲು ಆರಾರು ತಿಂಗಳು ತೆಗೆದುಕೊಂಡು ಅಮಾಯಕರನ್ನು ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳು ಹೀಗೆ ಎಲ್ಲ ನಿಯಮ ಬಾಹಿರ ಕೃತ್ಯಗಳಿಗೆ ಈ ವಿಭಾಗ ಮೂಲ ಸ್ಥಾನ.
ಇವೆಲ್ಲ ನಿಯಮ ಭಾಹಿರ ವಾಗಿ ಕಂಡರೂ ಇಲ್ಲಿನ ಎಲ್ಲಾ ಉಲ್ಲಂಘನೆಗಳೂ ನಿಯಮಾನುಸಾರವಾಗಿ ನಡೆಯುತ್ತೆ. ಏಕೆಂದರೆ ಪ್ರತಿ ನಿಯಮ ರೂಪಿಸುವಾಗಲೂ ತಮ್ಮ ಅನುಕೂಲಕ್ಕಾಗಿ "ವಿಶೇಷ ಪ್ರಕರಣ" ಎಂಬ ಕಳ್ಳ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ. ಎಲ್ಲಾ ನಿಯಮಗಳಿಗೂ ಒಂದು ಅಪವಾದವಿರುತ್ತದೆ. ಅದರ ಅನೈತಿಕ ಉಪಯೋಗ ಮಾಡಿಕೊಳ್ಳುವುದು ಇಲ್ಲಿನ ಪರಿಪಾಟ.
ಫೈಲ್ ಪೆಂಡೆಂನ್ಸಿ, ವಿದ್ಯುನ್ಮಾನ ಹಾಜರಾತಿ ವ್ಯವಸ್ಥೆ ಇತ್ಯಾದಿ ಇದ್ದರೂ ಅವನ್ನು "ವಿಶೇಷ ಪ್ರಕರಣ" ಎಂದು ಪರಿಗಣಿಸಿ,ಅವನ್ನು  ಕಂಡರೂ ಕಾಣದಂತೆ ನಟಿಸುವ ಇಲಾಖಾ ಮುಖ್ಯಸ್ಥರು . ಒಟ್ಟಾರೆ ಸೇವಾ ನಿಯಮಗಳನ್ನ ರೂಪಿಸುವ ಈ ಇಲಾಖೆ ಕರ್ನಾಟಕದ ಆಡಳಿತ ವ್ಯವಸ್ಥೆಯ ನೈತಿಕ ಅಧಪತನವನ್ನು ಬಿಂಬಿಸುತ್ತದೆ. ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆ ಯಂತಿರುವ ಈ ವಿಭಾಗವನ್ನು ಮುಚ್ಚಿ ಇಲ್ಲಿನ ಅನಕ್ಷರಸ್ತ ಪ್ರಮೋಟಿಗಳನ್ನು ಒದ್ದೋಡಿಸಿ "ಸೇವಾನಿಯಮಗಳನ್ನು ರೂಪಿಸುವ ಕೆಲಸವನ್ನು ಒಂದು ವ್ಯವಸ್ತಿತವಾದ ಪರಿಣಿತ ಸಂಸ್ಥೆಗೋ, ಲೋಕಾಯುಕ್ತಕ್ಕೋ ವಹಿಸಿದರೆ ಕರ್ನಾಟಕದಲ್ಲಿ ಬ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಬಹುದು.

(  "ಅಣ್ಣಾ ಹಜಾರೆ "ಯವರ ಬ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಬೆಂಬಲವಾಗಿ ಈ ಲೇಖನ ಪ್ರಕಟಿಸಲಾಗಿದೆ.)








Team Hazare v/s Govt of Karnataka

Saturday, August 6, 2011

Accept all RTI applications: Officials told



TNN Aug 6, 2011, 01.29pm IST



MANGALORE: Officials in the district have been directed to provide information under the Right to Information (RTI) Act, even if the application is not addressed to the public information officers (PIOs).


State Information Commissioner said he had noticed officials rejecting RTI applications on the grounds that PIO's address was not mentioned on it. "Accept the RTI application even if the applicant fails to mention the address of the PIO," he said adding that an official, who rejects, denies or delays giving the information can be penalised under the provisions of the RTI Act. He was addressing PIOs of various offices in the district at the zilla panchayat hall here on Friday.



In case of voluminous files, an RTI applicant should be allowed to view the file for one hour without being charged a fee. However, Rs 10 should be levied from the applicant for every additional half an hour. Officials should periodically update the list of all files in their offices and classify them according to its nature, he said adding that disposal of RTI application will be made easy if officials list and classify all files in their offices regularly.





Wednesday, August 3, 2011

ಜನ ಲೋಕ ಪಾಲ್ ಎಂದರೇನು ?

ಜನ ಲೋಕ ಪಾಲ್ ಎಂದರೇನು ?

Tuesday, August 2, 2011

ಸರ್ಕಾರಿ ಕಳ್ಳರಿಗೆ ಬಿ ಎಂ ಡಬ್ಲ್ಯೂ !


Karnataka eyes BMWs with price to match
B Sreedhara, Bangalore, July 7, DHNS:

The State government has decided to buy three high-end model bullet-proof BMW cars—one each for the chief minister and the governor and the third to be used as and when a foreign dignitary visits Karnataka. If everything goes according to plan, the State government will have three cars at the earliest.

The government took the decision to acquire the BMWs in view of heightened security. It has called for quotations from various companies manufacturing bullet proof cars. However, the government is willing to buy the BMW high-end model bullet-proof cars, sources said. Each car is likely to cost more than Rs 2 crore.

The immediate reason for the government’s interest in acquiring the BMWs is British Prime Minister David Cameron’s security establishment had expressed displeasure over the car given to him during his visit here last year. The British prime minister’s office wrote a letter to Rashtrapati Bhavan complaining that a good bullet-proof car was not provided to Cameron.

The President’s secretariat subsequently wrote a letter to the government, requesting it to have an exclusive bullet-proof car earmaked for foreign VVIPs.

Faced with a request from Rashtrapati Bhavan, Principal Secretary S V Ranganath recently held an emergency meeting of senior officers. At the meeting, also attended by Home Department Principal Secretary S M Jamdar, it was decided to purchase high-end bullet-proof cars in accordance with instructions from the President’s secretariat.
Besides, the government has invoked the primacy of security reasons for taking a decision in favour of purchasing the bullet-proof BMWs since terrorist organisations are said to closely monitor VVIP movement in the country.

When contacted, Jamdar told Deccan Herald: “We have initiated the process to buy three high-end bullet-proof cars. The proposal to buy the best cars in the world is an old one. The state government has given consent in principal to buy the cars.”

But Jamdar clarified that the state government was “not buying these cars exclusively for the chief minister and the governor.” The chief minister and governor can use these cars continuously or as and when required as they are also considered as VIPs, he said.

Monday, August 1, 2011

ಲೋಕಪಾಲ ಮಸೂದೆ

  ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ. ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು, ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ.[೧]
ಭ್ರಷ್ಟಾಚಾರ ವಿರೋಧಿ ಚಳವಳಿ - ಇಂಡಿಯಾ ಅಗೈನ್ಸ್ಟ್ ಕರಪ್ಷನ್ - ಐಏಸಿಯ ಮುಖಂಡರು ಮತ್ತು ನಾಗರಿಕ ಸಮಾಜದವರೊಂದಿಗೆ ಸಮಾಲೋಚಿಸಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ವಕೀಲ ಶಾಂತಿ ಭೂಷಣ್, ನಿವೃತ್ತ ಭಾರತೀಯ ಆರಕ್ಷಕ ಸೇವೆ (ಐಪಿಎಸ್) ಅಧಿಕಾರಿ ಕಿರಣ್ ಬೇಡಿ,ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಮಾಜಿ ಮುಖ್ಯ ಚುನಾವಣಾಧಿಕಾರಿ ಜೆ. ಎಂ. ಲಿಂಗ್ಡೋ ಅವರು ರಚಿಸಿರುವ ಈ ಮಸೂದೆಯ ಕರಡು, ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತರನ್ನುನೇಮಿಸುವ ಪ್ರಸ್ತಾವನೆಯನ್ನು ಹೊಂದಿದೆ. ಇದು ಭ್ರಷ್ಟಾಚಾರವನ್ನು ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ಸೂಕ್ತವಾಗಿ ರಕ್ಷಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಮತ್ತು ಮತ್ತು ಅನ್ಯಾಯವನ್ನು ಸರಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ರೂಪಿಸಲಾಗಿದೆ.[೨]
೧೯೬೯ರಲ್ಲಿಯೇ ಮೊದಲ ಬಾರಿಗೆ ಲೋಕಪಾಲ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತಾದರೂ, ರಾಜ್ಯಸಭೆಯಲ್ಲಿ ಅದು ಒಪ್ಪಿಗೆ ಪಡೆಯಲಿಲ್ಲ. ನಂತರ ೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮, ೨೦೦೧, ೨೦೦೫ ಮತ್ತು ೨೦೦೮ರಲ್ಲಿ ಮತ್ತೆ ಮಂಡಿಸಲಾಗಿಯಿತಾದರೂ ಅದು ಅಂಗೀಕಾರವಾಗಿರಲಿಲ್ಲ. ಅಣ್ಣಾ ಹಜಾರೆಯವರ ನಾಲ್ಕು ದಿನದ ಉಪವಾಸದ ನಂತರ ಪ್ರಧಾನಿ ಮನಮೋಹನ ಸಿಂಗ್‌ರವರು ೨೦೧೧ರ ಮುಂಗಾರು ಅಧಿವೇಶನದಲ್ಲಿ ಇದನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದೆಂದು ಹೇಳಿದರು.

ಹಿಂದೂ ವಿವಾಹ ನೊಂದಣಿ ಅಧಿಕಾರಿ ನೇಮಕಾತಿ ಯಾಕಿಲ್ಲ?



ವಿವಾಹ ನೋಂದಣಿಯನ್ನು ಇತ್ತೀಚಿನ ದಿನಗಳಲ್ಲಿ ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ವಿದೇಶಕ್ಕೆ ಹೋಗುವ ದಂಪತಿಗಳಿಗೆ ಸೀಮಿತವಾಗಿದ್ದ ಈ ನೋಂದಣಿ ಈಗ ಇತರ ಮದುವೆಯ ಸಂದರ್ಭಗಳಲ್ಲಿ ಕೂಡ ಅನುಸರಿಸಲಾಗುತ್ತಿದೆ. ವಿವಾಹವನ್ನು ಅಧಿಕೃತಗೊಳಿಸುವ ಕಾನೂನುಬದ್ಧ ಕ್ರಮವೇ ಈ ವಿವಾಹ ನೊಂದಣಿ.
ಹಿಂದೂ, ಮುಸ್ಲಿ ಮತ್ತು ಕ್ರೈಸ್ತ ಧರ್ಮಗಳಲ್ಲಿನ ನಿಯಮಗಳು ಆಯಾ ಧರ್ಮಕ್ಕನುಗುಣವಾಗಿದೆ. ಇದನ್ನು ಅನುಸರಿಸಿ, ಮುಸ್ಲಿಂ ವಿವಾಹಗಳ ನೋಂದಣಿ ಅಧಿಕಾರವನ್ನು ಆಯಾ ಮಸೀದಿಗಳಿಗೆ ನೀಡಲಾಗಿದೆ. ಅದೇ ರೀತಿ ಕ್ರೈಸ್ತ ಧರ್ಮೀಯರ ವಿವಾಹ ನೋಂದಣಿಗಾಗಿ ನೋಟರಿಗಳಲ್ಲಿ ಅವಕಾಶವಿದೆ ಮತ್ತು ಕ್ರೈಸ್ತ ಧರ್ಮೀಯರ ವಿವಾಹ ನೋಂದಣಿ ಅಧಿಕಾರಿಯನ್ನಾಗಿ ಕ್ರೈಸ್ತ ಧರ್ಮಕ್ಕೆ ಸೇರಿದ ನ್ಯಾಯವಾದಿ ನೋಟರಿಗಳ ನೇಮಕಾತಿಯನ್ನು ಸರಕಾರ ಮಾಡಿದೆ.
ಆದರೆ ಹಿಂದೂ ವಿವಾಹ ನೋಂದಣಿಯನ್ನು ಉಪ ನೋಂದಣಿ ಕಚೇರಿಗಳಲ್ಲಿ ಮಾಡಬೇಕಾಗಿದೆ. ಹಿಂದೂ ವಿವಾಹ ನೋಂದಣಿಯನ್ನು ನೋಟರಿಯವರ ಬಳಿ ಮಾಡಿಕೊಳ್ಳುವ ಕಾನೂನು ಇಲ್ಲಿ ಇಲ್ಲ. ಈ ಕಾರಣದಿಂದಾಗಿ ವಿವಾಹ ನೋಂದಣಿಗಾಗಿ ಹಿಂದೂ ಧರ್ಮೀಯರು ಉಪ ನೋಂದಣಿ ಕಚೇರಿಗೆ ಅಲೆದಾಡುವ, ತಾಸುಗಟ್ಟಲೆ ಸರದಿಯ ಸಾಲಲ್ಲಿ ಕಾಯುವ ಪ್ರಮೇಯವನ್ನು ಎದುರಿಸಬೇಕಾಗಿದೆ. ಕ್ರೈಸ್ತ ಮತ್ತು ಮುಸ್ಲಿಂ ಧರ್ಮೀಯರಿಗೆ ವಿವಾಹ ನೋಂದಣಿ ಸಂದರ್ಭದಲ್ಲಿ ಈ ತಾಪತ್ರಯವಿರುವುದಿಲ್ಲ.
ನೇಮಕಾತಿ ಸಾಧ್ಯ
ಹಿಂದೂ ವಿವಾಹ ನೋಂದಣಿ ಅಧಿಕಾರಿಯನ್ನಾಗಿ ನೋಟರಿ ವಕೀರನ್ನು ನೇಮಕಗೊಳಿಸಲು ಯಾವುದೇ ಹೆಚ್ಚಿನ ಕಾನೂನು ತೊಡಕುಗಳಿಲ್ಲ. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 5ಕ್ಕೆ ಸೂಕ್ತ ತಿದ್ದುಪಡಿ ತಂದು ವಿವಾಹ ನೋಂದಣಿ ನಿಯಮಾವಳಿಗಳನ್ನು ಜಾರಿಗೆ ತಂದಲ್ಲಿ ಹಿಂದೂ ವಿವಾಹ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ.
ಹಿಂದೂ ವಿವಾಹ ನೋಂದಣಿ ಅಧಿಕಾರಿ ನೇಮಕ ಮತ್ತು ವಿವಾಹ ಕಾಯಿದೆಯ ಸೆ. 5ಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿ, ಪುತ್ತೂರಿನ ನಾಗರಿಕ ಹಕ್ಕುಗಳ ಕಾರ್ಯಕರ್ತ ಡಿ.ಕೆ. ಭಟ್‌ ಅವರು ಕಳೆದ 5 ವರ್ಷಗಳಿಂದ ಸರಕಾರಕ್ಕೆ ಕನಿಷ್ಠ 70 ಪತ್ರಗಳನ್ನು ಬರೆದಿದ್ದಾರೆ. ಶಾಸಕರು ಮತ್ತು ಸಚಿವರುಗಳ ಮೂಲಕ ಒತ್ತಡ ತರುವಂತೆ ಪ್ರಯತ್ನ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ವಿವಾಹವಾದ ಸಭಾಮಂಟಪ ಅಥವಾ ಸ್ಥಳದ ಮುಖ್ಯಸ್ತರ ಪತ್ರ, ಪುರೋಹಿತರ ಧೃಢೀಕರಣ ಪತ್ರ ಮತ್ತು ಎರಡೂ ಕಡೆಯವರ ಹೆತ್ತವರ ಒಪ್ಪಿಗೆ ಪತ್ರಗಳನ್ನು ಅರ್ಜಿಯೊಂದಿಗೆ ಹಾಜರುಪಡಿಸಿ ವಿವಾಹ ನೋಂದಣಾಧಿಕಾರಿಗಳಲ್ಲಿ ಸರಳವಾಗಿ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಸೆಕ್ಷನ್‌ 5ಕ್ಕೆ ತಿದ್ದುಪಡಿ ತಂದಲ್ಲಿ ಸುಲಭ ಸಾಧ್ಯ ಎಂದು ಡಿ.ಕೆ. ಭಟ್‌ ಅಭಿಪ್ರಾಯಪಡುತ್ತಾರೆ. ಆದರೆ ಈ ವಿಚಾರದ ಕುರಿತಂತೆ ರಾಜ್ಯ ಸರಕಾರವು ಇಲ್ಲಿಯ ತನಕ ಯಾವುದೇ ಆಸಕ್ತಿ ತೋರ್ಪಡಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಎಲ್ಲ ಉಪ ನೊಂದಣಿ ಕಚೇರಿಗಳಲ್ಲೂ ಕೆಲಸದ ಒತ್ತಡಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ನ್ಯಾಯವಾದಿ ನೋಟರಿಗಳನ್ನು ವಿವಾಹ ನೋಂದಣಿ ಅಧಿಕಾರಿಗಳನ್ನಾಗಿ ನೇಮಕ ಮಾಡುವ ಅನಿವಾರ್ಯ ಹೆಚ್ಚಿದೆ. ಕಾನೂನುಬದ್ಧ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಈ ವ್ಯವಸ್ಥೆಯನ್ನು ಅನುಷ್ಠಾನಮಾಡಿದರೆ ಅನಗತ್ಯ ಅಲೆದಾಟ ತಪ್ಪಿದಂತಾಗುತ್ತದೆ. ರಾಜ್ಯ ಸರಕಾರ ಇನ್ನಾದರೂ ಇಂತಹ ಕ್ರಮಗಳಿಗೆ ಮುಂದಾಗಬಹುದು ಎಂದು ಡಿ.ಕೆ. ಭಟ್‌ ಆಶಯ ವ್ಯಕ್ತಪಡಿಸಿದ್ದಾರೆ 

Saturday, July 30, 2011

ಪಿಂಚಣಿ ನಿಧಿ ಮಸೂದೆ: ಸರ್ಕಾರಕ್ಕೆ ಬಿಜೆಪಿ ಬೆಂಬಲ

ಪಿಂಚಣಿ ನಿಧಿ ಮಸೂದೆ: ಸರ್ಕಾರಕ್ಕೆ ಬಿಜೆಪಿ ಬೆಂಬಲ
ನವದೆಹಲಿ (ಪಿಟಿಐ): ಎಡಪಕ್ಷಗಳ ಆಗ್ರಹದ ಮೇರೆಗೆ ಪಿಂಚಣಿ ನಿಧಿ ನಿಯಂತ್ರಣ ಮಸೂದೆ ವಿರುದ್ಧ ಲೋಕಸಭೆಯಲ್ಲಿ ಗುರುವಾರ ಮತವಿಭಜನೆಗೆ ಸೂಚಿಸಿದಾಗ ಬಿಜೆಪಿ ಅದನ್ನು ಬೆಂಬಲಿಸಿ ಸರ್ಕಾರವನ್ನು ಮುಜುಗರದಿಂದ ಪಾರು ಮಾಡಿತು.

ಈ ಮಸೂದೆ ವಿರುದ್ಧ ಮತವಿಭಜನೆಗೆ ಅವಕಾಶ ನೀಡಿದ ಸಂದರ್ಭದಲ್ಲಿ ಆಡಳಿತ ಪಕ್ಷಗಳ ಸಂಸದರು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು.

ಈ ಮುನ್ನ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ-2011ರ ವಿರುದ್ಧ ಮತವಿಭಜನೆಗೆ ಅವಕಾಶ ಕಲ್ಪಿಸಬೇಕು ಎಂದು ಸಿಪಿಎಂ ನಾಯಕ ಬಸುದೇವ ಆಚಾರ್ಯ ಒತ್ತಾಯಿಸಿದರು. ನಂತರ ಸ್ಪೀಕರ್ ಮೀರಾ ಕುಮಾರ್ ಮತವಿಭಜನೆಗೆ ಸೂಚಿಸಿದರು.

ಆ ವೇಳೆ ಸದನದಲ್ಲಿ 543 ಸದಸ್ಯರ ಪೈಕಿ 159 ಸದಸ್ಯರು ಮಾತ್ರ ಹಾಜರಿದ್ದರು. ಬಿಜೆಪಿಯ 30 ಸಂಸದರು ಸೇರಿ 115 ಸದಸ್ಯರು ಮಸೂದೆಯ ಪರವಾಗಿ ಹಾಗೂ 43 ಸದಸ್ಯರು ವಿರುದ್ಧ ಮತ ಹಾಕಿದರು. ಒಬ್ಬ ಸದಸ್ಯರು ಮತದಾನದಿಂದ ಹಿಂದೆ ಸರಿದರು.

ಪ್ರಧಾನಿ ಮನಮೋಹನ್ ಸಿಂಗ್, ಸದನದ ನಾಯಕ ಪ್ರಣವ್ ಮುಖರ್ಜಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮತ್ತಿತರ ಸಚಿವರು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿರಲಿಲ್ಲ. ಇದಕ್ಕೆ ಮುನ್ನ ಬಸುದೇವ ಅವರು ತಮ್ಮನ್ನು ಬೆಂಬಲಿಸುವಂತೆ ಬಿಜೆಪಿಯ ಎಲ್.ಕೆ.ಅಡ್ವಾಣಿ ಅವರನ್ನು ಕೋರಿದ್ದರು

Friday, April 29, 2011

The Karnataka Government Transfer Guidelines 2011 (New)

ವಿ.ಸೂ : ಇಲ್ಲಿ ಪಡೆಯುವ ಮಾಹಿತಿಗೆ ನೀವು ಲಂಚ ಕೊಡಬೇಕಾಗಿಲ್ಲ. ಕೊನೇಪಕ್ಷ ಕಾಮೆಂಟ್ /ಸಲಹೆ /ರೇಟಿಂಗ್  ಕೊಡೊ ಸೌಜನ್ಯವನ್ನಾದರೂ ತೋರಿಸಿ. ಈ ಮಾಹಿತಿ ಉಪಯುಕ್ತವೇ ಎಂಬ ಬಗ್ಗೆ ಲೇಖನದ ಕೊನೆಯಲ್ಲಿರುವ ಚೆಕ್ ಬಾಕ್ಷ್ ನಲ್ಲಿ ಕ್ಲಿಕ್ ಮಾಡಿ) 


The Last date for General transfers has been extended upto 30-6-2011 vide Govt.Order  # DPAR 12 STR 2011 Dated 31-5-2011.(ಸಿಆಸುಇ 12 ಸೇನೌವ 2011


The Karnataka Government Transfer Guidelines 2011 

2011-12  ಸಾಲಿನಲ್ಲಿ ಮಾಡುವ ವರ್ಗಾವಣೆ ಬಗ್ಗೆ ಮಾರ್ಗಸೂಚಿಗಳು .











The Karnataka Government Transfer Guidelines 2011-12

Friday, April 22, 2011

Circular about Transfer.


What they have said in this circular is pure shit. 90% of transfer, deputations etc done in the karnataka government's Secretariat is done on the basis of letters (notes) given by MP's, MLA's and Minister. Circulars like this are meant to harass hapless people.

Friday, April 15, 2011

Monday, March 21, 2011

ಸರ್ಕಾರಿ ನೌಕರರ ಪಂಚತಾರಾ ತರಬೇತಿ



ಗೋವಾ...,


ಕರ್ನಾಟಕ ಸರ್ಕಾರ...

ವಿಧಾನಸೌಧ....

ಪಂಚತಾರಾ ಹೋಟೆಲು/ರಿಸಾರ್ಟ್ ...

19 ಹೆಂಗಸರು, ಆರು ಪುರುಷರು...,

ಇವೆಲ್ಲಾ ಓದಿದ ಕೂಡಲೇ ನಿಮ್ಮ ಮನಸ್ಸಿಗೆ ಬರುವುದು ಶಾಸಕರ ರೆಸಾರ್ಟ್ ಪ್ರಹಸನ ...



ಬಟ್, ನಿಮ್ಮ ಊಹೆ ತಪ್ಪು....,

ಇದು ಸರ್ಕಾರ ಉರುಳಿಸಲು ಶಾಸಕರು ಮಾಡುತ್ತಿರುವ ಯಾತ್ರೆಯಲ್ಲ.

ಇದು ಸರ್ಕಾರ ನಡೆಸುವುದು ಹೇಗೆ ? ಎಂಬ ಬಗ್ಗೆ ತರಬೇತಿ ಪಡೆಯಲು ಸರ್ಕಾರಿ ನೌಕರರು ಮಾಡುತ್ತಿರುವ ದಂಡಯಾತ್ರೆ.



ತರಬೇತಿ?,

ಅದು ಗೋವಾದಲ್ಲಿ...,

ಅದೂ ರೆಸಾರ್ಟ್ ನಲ್ಲಾ?....

ಅದಕ್ಕಾಗಿ ಪ್ರತಿಯೊಬ್ಬ ನೌಕರನ ಮೇಲೆ ರಾಜ್ಯ ವ್ಯಯಿಸುತ್ತಿರುವ ಮೊತ್ತ ತಲಾ 31,000/-ರೂಪಾಯಿಗಳು,ಅದರ ಮೇಲೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡುತ್ತದೆ!.

ಸರ್ಕಾರಿ ನೌಕರರಿಗೆ ಸರ್ಕಾರ ಏನೂ ಉಪಕಾರಮಾಡುತಿಲ್ಲಾ ಅಂತಾ ಬೊಬ್ಬೆ ಹೊಡೆಯುವ ಕೃತಗ್ನ ಸಂಘಗಳು ಇದರಿಂದ ಎಚ್ಚೆತ್ತುಕೊಂಡು ಸರ್ಕಾರವನ್ನು ಅಭಿನಂದಿಸಬೇಕಾಗಿದೆ.



ಈ ಬಗ್ಗೆ ಸರ್ಕಾರವು ದಿ:10-3-2011 ರಂದು ಆದೇಶ ಸಂಖ್ಯೆ DPAR 20 KOT 2011 ಹೊರಡಿಸಿದೆ.

ಸರ್ಕಾರಿ ನೌಕರರಿಗೆ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ಯಾವ ಗಾಂಪನೂ ಹೇಳಬಲ್ಲ.

ಆದರೆ ನೌಕರರಿಗೆ ತರಬೇತಿ ನೀಡಲು ಗೋವಾದ ಪಂಚತಾರ ಹೋಟೆಲ್ ಆಯ್ಕೆಮಾಡಿಕೊಂಡಿರುವುದು ಸೋಜಿಗದ ಸಂಗತಿ. ಯಾಕೆಂದರೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ತರಬೇತಿ ಕೇಂದ್ರಗಳಿವೆ. ಬೆಂಗಳೂರಿನಲ್ಲಿ ಸಚಿವಾಲಯ ತರಬೇತಿ ಸಂಸ್ಥೆ ಇದೆ. ಮೈಸೂರಿನಲ್ಲಿ ರಾಜ್ಯ ಮಟ್ಟದ ಆಡಳಿತ ತರಬೇತಿ ಸಂಸ್ಥೆ ಇದೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ತರಬೇತಿ ಶಾಲೆ (ಐ.ಐ.ಎಂ) ಇದೆ.ಹಲವು ವಿಶ್ವವಿದ್ಯಾಲಯಗಳಿವೆ.ಈ ರಾಜ್ಯದೊಳಗೆ ಬೇಡ ಎಂದರೆ ದೇಶದಾದ್ಯಂತ ಯಾವುದೇ ತರಬೇತಿ ಸಂಸ್ಥೆಯೇ ಇಲ್ಲವೇ?,

ಈ ನೌಕರರ ಯೋಗ್ಯತೆಗೆ ಹೋಟೆಲ್ಗಳೇ ಸರಿ ಎಂಬ ಕಾರಣವೇ?, ವಿಧ್ಯಾ ಸಂಸ್ಹೆಗಳಲ್ಲಿ ಹೇಳಿಕೊಡದ, ಹೋಟೆಲ್ನಲ್ಲಿ ಹೇಳಿಕೊಡುವ “ವಿದ್ಯೆ”ಯಾದರೂ ಯಾವುದು?. ಹೋಟೆಲ್ಗಳಲ್ಲೇನು ಚೀಪಾಗಿ (ಕಡಿಮೆ ದರಕ್ಕೆ) ಕಲಿಸಿಕೊಡಲಾಗುತ್ತದೆಯೇ? ಎಂಬ ಪ್ರಶ್ನೆಗಳು ನಮ್ಮ ತಲೆತಿನ್ನತೊಡಗಿದವು.

ಸಮಕಾಲಿನ ಸಮಾಜದ ಸವಾಲುಗಳು ಬಹಳ ಸಂಕೀರ್ಣವಾಗಿರುತ್ತವೆ. ಅದರಲ್ಲೂ ಇಂದಿನ ಆಡಳಿತಗಾರರ ‘ಅವಶ್ಯಕತೆ’ಗಳೇನಿರುತ್ತವೋ ಯಾರಿಗೆ ಗೊತ್ತು?. ಹಳೇ ಸಿಲಬಸ್ಸನ್ನೇ ಇಟ್ಟುಕೊಂಡು ಅದೇ ಹಳೇ ರೀಲು ಸುತ್ತುವ ಸಂಪ್ರದಾಯಿಕ ತರಬೇತಿ ಕೇಂದ್ರಗಳಿಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಲು ನಮ್ಮ ಮಾಡರ್ನ್ ಅಧಿಕಾರಶಾಹಿಗಳಿಗೆ ಇಷ್ಟವಿಲ್ಲ ಅಂತಾ ಅನ್ನಿಸುತ್ತೆ. ಹಳೇ ಸಿಲಬಸ್ಸಲ್ಲೇ “ರಾಜ್ಯಶಾಸ್ತ್ರ” ಓದಿದ ನಮಗೆ ಈ ಬಗ್ಗೆ ತಾಳಲಾರದ ಕುತೂಹಲ. ಪ್ರಶ್ನೆಗಳೇ ಪ್ರಶ್ನೆಗಳು.

ಹೋಟೆಲ್ನಲ್ಲಿ ಏನು ಕಲಿಸುತ್ತಾರೆ?

ಈ ‘ತರಬೇತಿಯ’ ರೂಪು ರೇಷೆಗಳೇನು?,

ಇವರಿಗೆ ಹೊರಗಿಂದ ಬಂದ ಟ್ರೈನರ್ಸ್ ತರಬೇತಿ ನೀಡುತ್ತಾರೋ ಅಥವಾ ಅಲ್ಲಿನ ಸಪ್ಪ್ಲೇಯರ್ ಗಳೇ ಟ್ರೈನಿಂಗ್ ನೀಡುತ್ತಾರೋ?

ಇಲ್ಲಿನ ಕರಿಕ್ಯುಲಂ ಏನು ?

ತಲಾ ಮೂವತ್ತೊಂದು ಸಾವಿರ ಖರ್ಚುಮಾಡಿ ಇವರಿಗೆ ಎಂತಾ ತರಬೇತಿ ನೀಡುತ್ತಾರೆ?

ಇವರು ತರಬೇತಿ ಪಡೆದ ಮೇಲೆ ಅಲ್ಲಿ (ರಿಸಾರ್ಟ್ನಲ್ಲಿ) ಪಡೆದ “ಜ್ಞಾನವನ್ನು”ದೈನಂದಿನ ಆಡಳಿತ ದಲ್ಲಿ ಯಾವ ರೀತಿ ವಿನಿಯೋಗಿಸುತ್ತಾರೆ?.ಇತ್ಯಾದಿ,ಇತ್ಯಾದಿ..

ಸಮಸ್ಯೆ ಹಿಡಿದು ಬರುವ ಜನರ ಕಷ್ಟಗಳನ್ನು ನಿಮಿಷ ಮಾತ್ರದಲ್ಲಿ ಬಗೆಹರಿಸುತ್ತಾರೋ ನೋಡೋಣ ಎಂದುಕೊಂಡು ಅಲ್ಲಿ ಹೋಗಲು ಆಯ್ಕೆ ಆಗಿರುವವರ ಪಟ್ಟಿ ನೋಡಿದರೆ ಅದರಲ್ಲಿರುವವರ್ಯಾರೂ ನೇರವಾಗಿ ಆಡಳಿತ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವವರಲ್ಲ!. ಮುಕ್ಕಾಲು ಭಾಗ ಜನ ಬೆರಳಚ್ಚುಗಾರ್ತಿಯರು,ಇನ್ನುಳಿದವರು ವೃತ್ತಿಜೀವನದ ಸಂಧ್ಯಾಕಾಲದಲ್ಲಿ ಬಡ್ತಿ ಪಡೆದು ಅಧಿಕಾರಿಯಾಗಿರುವ ಜನ. ಇವರೂ ಸಹಾ ಸೇವಾನಿಯಮ,ಅಕೌಂಟ್ಸ್ ಇತ್ಯಾದಿ ಕಡೆ ರೂಟಿನ್ ಗುಮಾಸ್ತಿಕೆ ತರದ ಕೆಲಸ ಮಾಡುವವರೇ!.

ಯಾವ ಮಾನದಂಡವನ್ನು ಉಪಯೋಗಿಸಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ಇನ್ನೂ ನಿಗೂಡವಾಗಿಯೇ ಉಳಿದಿದೆ.’ಮಾನ ಇರುವವರನ್ನು ದಂಡದಿಂದ ಹೊಡೆದೋಡಿಸು’ ಎಂಬ ಫಾರ್ಮುಲಾ ಇಲ್ಲಿ ಉಪಯೋಗಿಸಲಾಗಿದೆ ಎಂದು ಕುಹಕಿಗಳ ಅಂಬೋಣ.

ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಯಾವುದೇ ನೀತಿ ನಿಯಮಗಳಿಲ್ಲದೆ ಆಯ್ಕೆಗಾರರು ಬೇಕು ಬೇಕಾದವರನ್ನು ಬೇಕಾಬಿಟ್ಟಿ ಆಯ್ಕೆ ಮಾಡಿದ್ದಾರೆ ಎಂಬುದು ಕೆಲವರ ಆರೋಪ. ಈ ಗೋವಾ ಯಾತ್ರೆಯಲ್ಲಿ ಸಂಘದ ಪದಾಧಿಕಾರಿಗಳಿಗೂ ಜಾಗ ಸಿಗದೇ ಅವರೂ ಸಹಾ ಚೀರಾಡುತಿದ್ದಾರೆ.(ವಿಷಯ ಇಷ್ಟೆಲ್ಲಾ ಗುಲ್ಲಾಗಲು ಅದೇ ಮುಖ್ಯ ಕಾರಣ).

ಅದೇನೇ ಇರಲಿ, ಈ ಆಯ್ಕೆ ಪ್ರಕ್ರಿಯೆಯಲ್ಲಿ ಎದ್ದು ಕಾಣುವ ಎರಡು ಪ್ರಮುಖ ಮಾನದಂಡಗಳೆಂದರೆ “ಜಾತಿ ಮತ್ತು ಲಿಂಗ”.

ಇಲ್ಲಿ ಆಯ್ಕೆಯಾಗಿರುವವರು ಎರಡು ವರ್ಗಕ್ಕೆ ಸೇರಿದವರು.

೧)ಶಾಖಾಧಿಕಾರಿ ವರ್ಗ (ಗ್ರೂಪ್-ಬಿ),

೨)ಶೀಘ್ರಲಿಪಿಗಾರ್ತಿಯರ ವೃಂದ (ಗ್ರೂಪ್ –ಸಿ) .

ಬಹುಷಃ ಗ್ರೂಪ್ –ಬಿ ವೃಂದದ ಸ್ಥಾನಗಳನ್ನು ಪುರುಷರಿಗೆ ಮೀಸಲಿಟ್ಟು ಗ್ರೂಪ್ –ಸಿ ವೃಂದದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ವಿನೂತನ ರೂಸ್ಟೆರ್ ಪದ್ದತಿಯನ್ನು ಆಡಳಿತ ಸುಧಾರಣೆ ಇಲಾಖೆ ಅನುಸರಿಸಿರುವಂತಿದೆ.

ಸಂಘದವರು ಹೇಳುವ ಪ್ರಕಾರ ಈ ಕಾರ್ಯಕ್ರಮಕ್ಕೆ ಗ್ರೂಪ್ –ಸಿ ನೌಕರರನ್ನು ಮಾತ್ರ ನಿಯೋಜಿಸಬೇಕಾಗಿತ್ತೆಂದು ಸರ್ಕಾರದ ಆದೇಶ ಸಂಖ್ಯೆ DPAR 20KOT 2011 ನಲ್ಲಿ ಉಲ್ಲೇಖಿತವಾಗಿರುವ ಕೇಂದ್ರ ಸರ್ಕಾರದ ಪತ್ರದಲ್ಲಿ ಹೇಳಲಾಗಿತ್ತು. ಗ್ರೂಪ್ –ಸಿ ಎಂದರೆ ಕಿರಿಯ ಸಹಾಯಕ/ಕಿ , ಟೈಪಿಸ್ಟ್,ಸಹಾಯಕ/ಕಿ, ಹಿರಿಯ ಸಹಾಯಕಿ/ಕ, ಇವರೆಲ್ಲಾ ಇರುತ್ತಾರೆ. ಇದರಲ್ಲಿ ಎಲ್ಲರನ್ನೂ ಉಪೇಕ್ಷಿಸಿ ಕೇವಲ ಶೀಘ್ರಲಿಪಿಗಾರ್ತಿಯರನ್ನು ಇಷ್ಟು ಶೀಘ್ರವಾಗಿ ಆರಿಸಿ ಕಳುಹಿಸುವ ಅಗತ್ಯವೇನಿತ್ತು ಎಂಬುದು ಸಹಾಯಕರ ಸಂಘದವರ ಪ್ರಶ್ನೆ. ಏನೇ ಆದರೂ ಅವರೂ ಸಹಾ ಗ್ರೂಪ್ –ಸಿ ಆಗಿರುವುದರಿಂದ ಅವರ ಆಯ್ಕೆ ನಿಯಮಾನುಸಾರ ಇದೆ ಎಂಬುವ ಮಾತನ್ನು ಸಂಘದವರು ಮುಖಾ ಕಿವುಚಿ ಒಪ್ಪಿಕೊಳ್ಳುತ್ತಾರೆ.

ಆದರೆ ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ತೂರಿಸಿರುವ ಗ್ರೂಪ್-ಬಿ ನ ಅಧಿಕಾರಿಗಳ ಕಿಲಾಡಿತನದ ಬಗ್ಗೆ ಎಲ್ಲರೂ ತಲೆದೂಗಬೇಕಾದದ್ದೇ.ಏಕೆಂದರೆ ಈ ಸಚಿವಾಲಯದಲ್ಲಿ ಸುಮಾರು ಒಂದು-ಒಂದೂವರೇ ಸಾವಿರ ನೌಕರರಿದ್ದಾರೆ.ಅದರಲ್ಲಿ ಎಲ್ಲರನ್ನೂ ಹಿಂದೆಹಾಕಿ, ನಿಯಮಗಳನ್ನು ಮುರಿದು ಈ ಸ್ವರ್ಗರೋಹಣಕ್ಕೆ ಹೋಗಿರುವ ಅಧಿಕಾರಿಗಳ ಸಾಧನೆ ಮಹತ್ವದ್ದು. ಆದುದರಿಂದ ಇಂತಹಾ ‘ಅರ್ಹರ’ಬಗ್ಗೆ ಒಂದಿಷ್ಟು ತಿಳಿದು ಪಾವನರಾಗೋಣ.ಏಕೆಂದರೆ ‘ಫಾಲ್ಲೋ ದಿ ಲೀಡರ್’ ಎಂಬ ನಾಣ್ನುಡಿಯಂತೆ ಗೆದ್ದವರ ಉದಾಹರಣೆ ಎಲ್ಲರಿಗೂ ಆದರ್ಶ ಪ್ರಾಯವಲ್ಲವೇ!. ಈ ಮಹಾನುಭಾವರು ಈ ಸಾವಿರ ಜನರಲ್ಲಿ ಇರದ ಯಾವ ವಿಶೇಷತೆ ಹೊಂದಿದ್ದಾರೆ ಎಂದು ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲ ಇರಬಹುದು.
(to be continued)

(ಚಿತ್ರದಲ್ಲಿ )ಅಧಿಕಾರಿಗಳು ತರಬೇತಿ ಪಡೆಯುತ್ತಿರುವ ವೈಖರಿ ....


                                             





Friday, March 18, 2011

Thursday, March 17, 2011

FD01SRA2011 Dt:05-03-2011

FD 01 SRA 2011 Dt:05-03-2011

Friday, January 7, 2011

Senior cops refuse to forgo 'orderly' luxury

Senior cops refuse to forgo 'orderly' luxury

Vinay Madhav, TNN Jan 6, 2011, 07.49am IST
BANGALORE: They are trained in crime detection, handling law and order situations and traffic management but end up by cutting vegetables, doing dishes, washing and gardening in senior officers' homes. Efforts to abolish this system, a legacy of British Raj's `koi hai,' glory days have come to naught in 21st century Karnataka's police force.
And it costs the exchequer a packet. If one goes by police manual's sanctioned posts (3,000), the cost is a whopping Rs 4.5 crore monthly. But police department's records show only 1,000 constables posted as orderlies. Even that works out to Rs 1.5 crore spent per month on providing domestic staff to police officials.
It's not just constables, but also head constables who are posted as orderlies to the houses of senior police officials. However, this is apart from the car drivers and escort personnel provided to the senior police officerss.

REFORM EFFORTS STONEWALLED

A recent effort to reform police force by doing away with orderlies and publishing assets and liabilities of police on website faced stiff resistance from senior IPS officers and was dropped. The idea was mooted by DG&IGP Ajai Kumar Singh, who placed it before the senior officers. Admitting that he had to drop the idea following resistance from officers, he told TOI: "Before forming committee to implement the proposals, we wanted to elicit opinion of senior police officers. About publishing assets and liabilities on the website, most of the officers pointed out that there were no rules for that. The Lokayukta made a similar such proposal to IAS officers which too was shelved.''
When it came to doing away with orderlies, the problem was that the Karnataka Police Manual itself has a provision for that. "In the first place, we have to make amendments to the manual. Secondly, most of the police officers wanted to know what would be the alternative for orderlies. It may take some more time before every one starts accepting the idea," he added.